ಗೋಪಾಲಕರು ಕರ್ನಾಟಕ - Gopalakaru Karnataka

ಗೋಪಾಲಕರು ಕರ್ನಾಟಕ - Gopalakaru Karnataka ಖರ್ಚು ಕಡಿಮೆ ಮಾಡಿ ಗುಣಮಟ್ಟದ ಹಾಲು ಮತ್ತು ?

ನಮಸ್ಕಾರ ಗೆಳೆಯರೇನಾವು ಯಾವುದೇ ಪ್ರಾಣಿಗಳ ಸಾಕಾಣಿಕೆ ಮೊದಲು ನಮಗೆ ತರಬೇತಿ ಅತ್ಯಂತ ಅವಶ್ಯಕ *ಗೋಪಾಲಕರು ಕರ್ನಾಟಕ*  ಇನ್ನೂ ಮುಂದೆ ನಿಮಗೆ ಕೆಲವು...
14/07/2022

ನಮಸ್ಕಾರ ಗೆಳೆಯರೇ
ನಾವು ಯಾವುದೇ ಪ್ರಾಣಿಗಳ ಸಾಕಾಣಿಕೆ ಮೊದಲು ನಮಗೆ ತರಬೇತಿ ಅತ್ಯಂತ ಅವಶ್ಯಕ *ಗೋಪಾಲಕರು ಕರ್ನಾಟಕ* ಇನ್ನೂ ಮುಂದೆ ನಿಮಗೆ ಕೆಲವು ಪ್ರಾಣಿಗಳ ಪಾಲನೆ ಮತ್ತು ಪೋಷಣೆ ಬಗ್ಗೆ ತಿಳಿಸಿ ಕೊಡಲು ಇಚ್ಚಿಸುತ್ತೇವೆ ನಿಮಗೆ ಇಷ್ಟ ವಾದರೆ ನಮ್ಮ ಫೇಸ್ಬುಕ್ ಚಾನೆಲ್ ಗೋಪಾಲಕರು ಕರ್ನಾಟಕ like and follow ಮಾಡಿ.
ನಾವು ತಿಳಿಸಿ ಕೊಡುವ ಪ್ರಾಣಿ ಸಾಕಾಣಿಕೆ ಮಾಹಿತಿ ಈ ಕೆಳಗಿನಂತಿವೆ

1)ಹೈನುಗಾರಿಕೆ.
2)ಕುರಿ ಮತ್ತು ಮೇಕೆ ಸಾಕಾಣಿಕೆ.
3)ಕೋಳಿ ಸಾಕಾಣಿಕೆ.
4)ಹಂದಿ ಸಾಕಾಣಿಕೆ.
5) ಮೊಲ ಸಾಕಾಣಿಕೆ.
6)ಮೆವಿನ ಬೆಳೆಗಳ ಮಾಹಿತಿ.
7)ರಸಮೇವು ತಯಾರಿಸುವ ವಿಧಾನ.

21/01/2022
10/01/2022

ರಮೇಶ್ ಅರವಿಂದ್ ರವರ ಸೊಗಸಾದ ಮಾತುಗಳು ಕೇಳಿ ನಿಮಗೆ ಇಷ್ಟ ಆದರೆ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ

08/01/2022

ರೈತ ಬಾಂಧವರೇ ದಯವಿಟ್ಟು ದಲ್ಲಾಳಿ ಗಳಿಗೆ ನಿಮ್ಮ ಬೇಳೆಗಳನ್ನು ಕೊಡುವಾಗ ಎಚ್ಚರ ವಿರಲಿ ದಲ್ಲಾಳಿಗಳು ನಿಮಗೇ ಮೋಸ ಮಾಡಬಹುದು 😔😔😔

08/01/2022

ಭಿಕ್ಷುಕರಿಗೆ ಹಣ ಕೊಡುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ ನೋಡಿ ಕೊಡಿ ಮೋಸಮಾಡುವವರೇ ಹೆಚ್ಚು 😔😔😔

05/01/2022

ರೈತ ಬಾಂಧವರಲ್ಲಿ ಮನವಿ ದಯವಿಟ್ಟು ಯಾರೂ ಸಹ ರೋಡಿನಲ್ಲಿ ರಾಗಿ ,ಭತ್ತ. ಹರುಳಿ ಇತರ ಧಾನ್ಯಗಳನ್ನು ರೋಡಿನಲ್ಲಿ ಒಕ್ಕಣೆ ಮಾಡಬೇಡಿ.... ಒಂದು ದಿನ ಕಷ್ಟ ಆದರೂ ಪರವಾಗಿಲ್ಲ ತಮ್ಮ ಜಮೀನಿನಲ್ಲಿ ಕಣವನ್ನು ಮಾಡಿ ಅಲ್ಲಿಯೇ ಒಕ್ಕಣೆ ಮಾಡಿ... ಇದನ್ನು ತಿಳಿಯಿರಿ ಮತ್ತು ನಿಮ್ಮ ಅಕ್ಕ ಪಕ್ಕದ ಹಳ್ಳಿಯ ಜನಗಳಿಗೆ ಮನವರಿಕೆ ಮಾಡಿ 🙏🙏🙏🙏

13/11/2021

ಹೇಳಲು ಪದಗಳೇ ಇಲ್ಲ.
ಮತ್ತೆ ಹುಟ್ಟಿ ಬನ್ನಿ ಸರ್.

13/11/2021

ಇನ್ನೇನು ಕೆಲವು ದಿನಗಳಲ್ಲಿ ಗೌರಿಹಬ್ಬ ಬರುತ್ತಿದೆ.
ಗೌರಿಹಬ್ಬ ಎಂದರೆ ನಮಗೆಲ್ಲ ನೆನಪಾಗೋದು ಸಕ್ಕರೆ ಗೊಂಬೆಗಳು ಕಾಲಕ್ರಮೇಣ ಕೆಲವು ಸಂಪ್ರದಾಯಗಳು ಹಬ್ಬಗಳ ಆಚರಣೆಗಳು ಕಡಿಮೆ ಆಗುತ್ತಿವೆ ಶಂಭಣ್ಣ ಅವರ ಕುಟುಂಬ. ದಶಕಗಳಿಂದ ಈ ಕಾಯಕ ಮಾಡುತ್ತಿದ್ದಾರೆ. ನಮ್ಮ ಸಂಪ್ರದಾಯ ಉಳಿಸಿ ಕೊಂಡು ಬರುತ್ತಿರುವ ಈ ಕುಟುಂಬಕ್ಕೆ ನಮ್ಮ ಧನ್ಯವಾದಗಳು 🌷🌷🌷.

09/11/2021

"ವೈದ್ಯೋ ನಾರಾಯಣೋ ಹರಿ" ಎಂಬ ಪದಕ್ಕೆ ಅರ್ಥ ಬಂದಿದ್ದ ಈ ಡಾಕ್ಟರ್ಸ್ ನೋಡಿದಾಗ.

ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ದೇವರು ಸ್ವರೂಪಿಯಾಗಿ ಕಾಣಿಸುತ್ತಾರೆ. ನಮಗೆ ಏನಾದರೂ ಆದಾಗ ಅಥವಾ ನಮ್ಮ ಆಪ್ತರಿಗೆ ಏನಾದರೂ ಆರೋಗ್ಯ ಸಮಸ್ಯೆ ಸಂಭವಿಸಿದಾಗ ಅವರನ್ನು ಬದುಕಿಗೆ ಮರಳಿ ತರುವ, ನಮ್ಮ ಬದುಕಿನಲ್ಲಿ ಭರವಸೆ ತುಂಬುವ, ಸಂತೋಷಕ್ಕೆ ಕಾರಣವಾಗುವ ವೈದ್ಯರು ನಮಗೆ ದೇವರ ಸಮನಾಗಿರುತ್ತಾರೆ.

ಎಷ್ಟೋ ವೈದ್ಯರು ತಮ್ಮ ಕುಟುಂಬಕ್ಕಿಂತ ರೋಗಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಒಂದು ಎಮರ್ಜೆನ್ಸಿ ಬಂದಾಗ ಹಗಲು, ರಾತ್ರಿ ಎನ್ನದೆ ಓಡೋಡಿ ಬಂದು ರೋಗಿಗಳ ಸೇವೆ ಮಾಡುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ತಾವು ಆರಾಧಿಸುವ ಒಬ್ಬ ವೈದ್ಯರು ಇದ್ದೇ ಇರುತ್ತದೆ.

ನೀವು ಕಂಡ ನಿಮ್ಮ ಜೀವನದಲ್ಲಿ ದೇವರಾಗಿ ಬಂದ ಡಾಕ್ಟರ್ ನಾ ಕಾಮೆಂಟ್ ನಲ್ಲಿ ಧನ್ಯವಾದಗಳು ತಿಳಿಸಿ.

01/11/2021

ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್​ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ.

ಪುನೀತ್​ ರಾಜ್​ಕುಮಾರ್​ ಅವರನ್ನು ಕೋಟ್ಯಂತರ ಜನರು ಆರಾಧಿಸುತ್ತಿದ್ದರು. ಅವರ ನಟನೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಕರ್ನಾಟಕ ಮಾತ್ರವಲ್ಲದೇ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ದೇಶ-ವಿದೇಶಗಳಲ್ಲೂ ಅವರ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಹಾಗಾಗಿ ಅಲ್ಲಿನ ಸಿನಿಪ್ರಿಯರಿಗೂ ಪುನೀತ್​ ಪರಿಚಿತರಾಗಿದ್ದರು. ಆ ಕಾರಣಕ್ಕಾಗಿ ವಿದೇಶದ ಅನೇಕ ಸುದ್ದಿ ವಾಹಿನಿಗಳು ಪುನೀತ್​ ರಾಜ್​ಕುಮಾರ್​ ಅವರ ಅಗಲಿಕೆಯ ವಾರ್ತೆಯನ್ನು ಬಿತ್ತರಿಸಿವೆ.

ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್​ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ನರೇಂದ್ರ ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಬೆಂಗಳೂರಿನಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶಗಳನ್ನು ಈ ವಾಹಿನಿ ಬಿತ್ತರಿಸಿದೆ. ಪುನೀತ್​ ರಾಜ್​ಕುಮಾರ್​ ಅವರ ಸಾಧನೆಗಳನ್ನು ವಿವರಿಸಲಾಗಿದೆ. ಪುನೀತ್​ ನಿಧನಕ್ಕೆ ಕಾರಣ ಏನು? ಅವರ ಅಗಲಿಕೆಯಿಂದ ಅಭಿಮಾನಿಗಳು ಹೇಗೆಲ್ಲ ಕಂಬನಿ ಮಿಡಿಯುತ್ತಿದ್ದಾರೆ? ಸದ್ಯ ಬೆಂಗಳೂರಿನಲ್ಲಿ ಪರಿಸ್ಥಿತಿ ಯಾರ ರೀತಿ ಇದೆ ಎಂಬುದನ್ನು ಈ ನ್ಯೂಸ್​ ಚಾನೆಲ್​ನಲ್ಲಿ ತಿಳಿಸಲಾಗಿದೆ.

Address

Huvinabadgalli

Telephone

+918618721274

Website

Alerts

Be the first to know and let us send you an email when ಗೋಪಾಲಕರು ಕರ್ನಾಟಕ - Gopalakaru Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ಗೋಪಾಲಕರು ಕರ್ನಾಟಕ - Gopalakaru Karnataka:

Share

Category